ಕುಂದಾಪುರ: ಡಿಸೆಂಬರ್ 8- ಕೊರ್ಗಿ ವಿಠಲ ಶೆಟ್ಟಿಯವರಿಗೆ ನಾಗರೀಕದಿಂದ ಸನ್ಮಾನ ಉಚಿತ ಆರೋಗ್ಯ ತಪಾಸಣೆ

ಕುಂದಾಪುರ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಠ್ಠಲ ಶೆಟ್ಟಿ ಕೊರ್ಗಿ ಇವರಿಗೆ ನಾಗರಿಕರಿಂದ ಅಭಿನಂದನಾ ಸನ್ಮಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವು ಡಿಸೆಂಬರ್ 8 ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಕುಂಭಾಸಿಯ ಶ್ರೀ ವಿನಾಯಕ ಸಭಾಗೃಹ ಆನೆಗುಡ್ಡೆಯಲ್ಲಿ ನಡೆಯಲಿದೆ ಎಂದು ಕೊರ್ಗಿ ವಿಠಲ ಶೆಟ್ಟಿ ಅಭಿನಂದನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಉಡುಪಿಯ ಆದರ್ಶ ಆಸ್ಪತ್ರೆಯ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ ಮತ್ತು ಉಚಿತವಾಗಿ ಔಷಧಿಯನ್ನು ನೀಡಲಾಗುತ್ತದೆ. ಜನರಲ್ ಮೆಡಿಸಿನ್/ಪ್ರಸೂತಿ ಮತ್ತು ಸ್ತ್ರೀರೋಗ/ಚರ್ಮರೋಗ ಹೃದಯರೋಗ ವಿಭಾಗಗಳ ವೈದ್ಯರಿಂದ ಉಚಿತ ತಪಾಸಣೆ, ಕಣ್ಣಿನ ವಿಭಾಗ, ರಕ್ತದ ಸಕ್ಕರೆ ಅಂಶ, ಇಸಿಜಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತದೆ.
ಡಾ. ಎನ್. ಸನ್ಮಾನ್ ಶೆಟ್ಟಿ ಕುಂಭಾಶಿ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಡಾ. ಸುದೀಪ್ ಶೆಟ್ಟಿ ಜನರಲ್ ಮೆಡಿಸಿನ್, ಹೃದ್ರೋಗ ತಜ್ಞ ಡಾ. ವಿಶು ಕುಮಾರ ಬಿ., ಚರ್ಮರೋಗ ತಜ್ಞ ಡಾ. ಅರುಣ್ ಶೆಟ್ಟಿ ಕೆ. ಉಪಸ್ಥಿತರಿರುತ್ತಾರೆ ಎಂದು ಕೊರ್ಗಿ ವಿಠಲ ಶೆಟ್ಟಿ ಅಭಿನಂದನಾ ಸಮಿತಿ ತಿಳಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.