ಕುಂದಾಪುರ: ಕೋಡಿ ಬೀಚ್ ನಲ್ಲಿ ಈಜಲು ಹೋದ ಇಬ್ಬರು ಸಮುದ್ರ ಪಾಲು, ಒಬ್ಬನ ಮೃತದೇಹ ಪತ್ತೆ, ಮತ್ತೊಬ್ಬಗೆ ಶೋಧ
ಕುಂದಾಪುರ: ಕೋಡಿ ಬೀಚಿನಲ್ಲಿ ಈಜಾಡಲು ಹೋಗಿದ್ದ ಇಬ್ಬರು ನೀರುಪಾಲಾದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಸಮುದ್ರ ಪಾಲಾದ ಇಬ್ಬರ ಪೈಕಿ ಒಬ್ಬರ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಸಮುದ್ರಪಾಲಾದವರ ಪೈಕಿ ಒಬ್ಬ ವ್ಯಕ್ತಿಯನ್ನು ಬೆಂಗಳೂರಿನ ದಾಸರಹಳ್ಳಿ ಎಂಬಲ್ಲಿಯ ನಿವಾಸಿ ಅಜಯ್ ಎಂದೂ ಇನ್ನೊಬ್ಬ ವ್ಯಕ್ತಿಯನ್ನು ಕುಂದಾಪುರ ತಾಲೂಕಿನ ಆನಗಳ್ಳಿಯ ಸಂತೋಷ್ ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ಬಂದಿದ್ದ ಸ್ನೇಹಿತ ಅಜಯನನ್ನು ಸಂತೋಷ್ ಕೋಡಿಬೀಚಿಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಸಮುದ್ರದ ತೆರೆಗಳ ನಡುವೆ ಆಟವಾಡುತ್ತಿದ್ದ ವೇಳೆ ಬಲವಾಗಿ ಬೀಸಿದ ತೆರೆಯ ಅಬ್ಬರಕ್ಕೆ ಇಬ್ಬರು ಸಮುದ್ರ ಪಾಲಾಗಿದ್ದಾರೆ.

ಈ ಬಗ್ಗೆ ಸ್ಥಳೀಯ ಮೀನುಗಾರರು ಈಜು ತಜ್ಞರು ನಾಪತ್ತೆಯಾದವರ ಹುಡುಕಾಟದಲ್ಲಿ ನಿರತರಾಗಿದ್ದು, ಆನಗಳ್ಳಿಯ ಸಂತೋಷ ಮೃತದೇಹ ಪತ್ತೆಯಾಗಿದ್ದು ಬೆಂಗಳೂರಿನ ಯುವಕ ಅಜಯ್ ನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.