*ಕುಂದಾಪುರ: ನಾಳೆ ದೇವಲ್ಕುಂದ ವಿ.ವಿ.ಆಗ್ರೋ ಸಂಸ್ಥೆಯಲ್ಲಿ ಉಚಿತ ವೈದ್ಯಕೀಯ ಶಿಬಿರ*
ಕುಂದಾಫುರ: ಗ್ರಾಮೀಣ ಭಾಗಗಳ ಜನ ಸಮುದಾಯಕ್ಕೆ ಆರೋಗ್ಯ ಸಂರ್ಕಷಣೆಯ ಮಾಹಿತಿ ಹಾಗೂ ವೈದ್ಯಕೀಯ ತಪಾಸಣೆ ನಡೆಸುವ ಪ್ರಕ್ರಿಯೆಗಳು ನಡೆಯುತ್ತಿದ್ದು, ನಾಳೆ ಮಂಗಳವಾರ ಬೆಳಿಗ್ಗೆ 9 ಘಂಟೆ ಯಿಂದ ಕುಂದಾಪುರದ ದೇವಲ್ಕುಂದದಲ್ಲಿರುವ ವಿ ವಿ ಆಗ್ರೋ ಪ್ರಾಡಕ್ಟ್ ಸಂಸ್ಥೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಮಣಿಪಾಲ ಕೆ ಎಂ ಸಿ ಯವರು ನಡೆಸಿಕೊಡುವ ಈ ಶಿಬಿರವನ್ನು ಅಂತರಾಳ ಫೌಂಡೇಶನ್(ರಿ ), ವಿ. ವಿ ಆಗ್ರೋ ಪ್ರಾಡಕ್ಟ್ಸ್, ಮತ್ತು ಅಮೃತ ಧಾರ ಲಯನ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಸುತ್ತ ಮುತ್ತಲಿನ ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದು ಕೊಳ್ಳಬೇಕಾಗಿ ವಿ ವಿ ಆಗ್ರೋ ದ ಮುಖ್ಯಸ್ಥ ವೆಂಕಟೇಶ್ ನಾಯಕ ತಿಳಿಸಿದ್ದಾರೆ.
