ಕುಂದಾಪುರ: ಅಕ್ರಮ ಗೋವಾ ಮಧ್ಯ ಸಾಗಾಟ- ವಾಹನ ಸಹಿತ ಸ್ವತ್ತು ವಶ
ಕುಂದಾಪುರ: ಅಕ್ರಮವಾಗಿ ಗೋವಾ ಮತ್ತೆ ಸಾಗಿಸುತ್ತಿದ್ದ ವಾಹನ ಸಮೇತ ಮಧ್ಯವನ್ನು ವಶಪಡಿಸಿಕೊಂಡ ಘಟನೆ ಕುಂದಾಪುರ ತಾಲೂಕಿನ ತಲ್ಲೂರು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.

ಟಾಟಾ ಏಸ್ ಗೂಡ್ಸ್ ವಾಹನದ ಪ್ಲಾಟ್ಫಾರ್ಮ್ ಕೆಳಗೆ ವಿಶೇಷ ಕಂಪಾರ್ಟ್ಮೆಂಟ್ ರಚಿಸಿಕೊಂಡು ಅದರಲ್ಲಿ ಅಕ್ರಮವಾಗಿ 20.250 ಲೀಟರ್ ಗೋವಾ ಮಧ್ಯವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಕುಂದಾಪುರ ವಲಯ ಅಬಕಾರಿ ಉಪನಿರೀಕ್ಷಕ ನಿತ್ಯಾನಂದ ಹಾಗೂ ತಂಡ ದಾಳಿ ನಡೆಸಿ ವಾಹನ ಸಹಿತ ಮಧ್ಯವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದ ಚಾಲಕ ಕುಂದಾಪುರ ತಾಲೂಕಿನ ಆನಗಳ್ಳಿ ಗ್ರಾಮದ ಕಂಪನತಪ್ಲು ನಿವಾಸಿ ಬೆಂಜಮೀನ್ ಡಿಸೋಜ ಎಂಬುವರ ಪುತ್ರ ನೆಲ್ಸನ್ ಡಿಸೋಜಾ ಎಂಬಾತನನ್ನು ಸ್ಪಂದಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಅಲ್ಲದೆ ರೂ.3.26 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಮತ್ತು ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತ ನಿರ್ದೇಶನದಂತೆ ಕುಂದಾಪುರ ವಲಯದ ಅಬಕಾರಿ ಸಿಬ್ಬಂದಿಗಳಾದ ರವಿಚಂದ್ರ ನಾಯ್ಕ, ಹೆಡ್ಕಾನ್ಸ್ಟೇಬಲ್ ಶಂಕ್ರಪ್ಪ, ವಾಹನ ಚಾಲಕ ಚಂದ್ರಶೇಖರ್ ದಾಳಿಯಲ್ಲಿ ಭಾಗವಹಿಸಿದ್ದರು.