ಬಸ್ರೂರು: ಬೈಂದೂರು ಉತ್ಸವ ಪ್ರೊಮೋ ಬಿಡುಗಡೆ ಮಾಡಿದ ಬಿ.ಅಪ್ಪಣ್ಣ ಹೆಗ್ಡೆ
ಕುಂದಾಪುರ: ನವಂಬರ್ 1, 2, 3ರಂದು ಮೂರು ದಿನಗಳ ಕಾಲ ಬೈಂದೂರಿನಲ್ಲಿ ನಡೆಯಲಿರುವ ಬೈಂದೂರು ಉತ್ಸವ 2024ರ ಪ್ರೋಮೋ ವನ್ನು ಮಾಜಿ ಶಾಸಕ, ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಗುರುವಾರ ಸಂಜೆ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಅವರು, ರಾಜ್ಯದಲ್ಲಿ ಅತ್ಯಂತ ಗ್ರಾಮೀಣ ಭಾಗಗಳನ್ನು ಒಳಗೊಂಡಿರುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೈಂದೂರು ಉತ್ಸವ ಇಡೀ ಜಗತ್ತಿಗೆ ಒಂದು ಉತ್ತಮ ಸಂದೇಶ ನೀಡಲಿದೆ ಎಂದರು. ಕುಂದಾಪುರದ ಭಾಷೆ ನೆಲ, ಜಲ, ಸಂಸ್ಕೃತಿಯು ಕರ್ನಾಟಕಕ್ಕೆ ವಿಶೇಷ ಕೊಡುಗೆ ನೀಡಿದೆ. ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಹಾಗೂ ಉದ್ಯಮ ಕ್ಷೇತ್ರದಲ್ಲೂ ಹೆಸರು ಮಾಡಿರುವ ಬೈಂದೂರಿನಲ್ಲಿ ಬೈಂದೂರು ಉತ್ಸವ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಈ ಸಂದರ್ಭ ಬೈಂದೂರು ಉತ್ಸವದ ಸಂಚಾಲಕ ಗಣೇಶ್ ಗಾಣಿಗ ಉಪ್ಪುಂದ, ಪುಷ್ಪರಾಜ್ ಶೆಟ್ಟಿ, ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಶರತ್ ಶೆಟ್ಟಿ ಬಿಜೂರು, ಪುರಂದರ ಉಪ್ಪುಂದ, ಶಿಕ್ಷಕ ಶ್ರೀಧರ್ ವಸ್ರೆ, ಪತ್ರಕರ್ತ ಕೃಷ್ಣ ಬಿಜೂರ್ ಮೊದಲಾದವರು ಉಪಸ್ಥಿತರಿದ್ದರು.