BlogEducationEntertainmentFashionHighlightsHuman storiesLifestyleLocal newsOthersTop StoriesTrending

ಮುಡಿಪು: ಪದ್ಮಶಾಲಿ ಸೇವಾಸಮಿತಿ ಕಾಡುಮಠ ವತಿಯಿಂದ ಸಾಂಸ್ಕೃತಿಕ ಮನೊರಂಜನಾ ಸ್ಪರ್ಧೆ

Aware others:

ಮಂಗಳೂರು: ಪದ್ಮಶಾಲಿ ಸೇವಾಸಮಿತಿ, ಕಾಡುಮಠ ವಿಟ್ಲ ಇದರ ವತಿಯಿಂದ ಹಮ್ಮಿಕೊಳ್ಳಲಾದ ಸಾಂಸ್ಕೃತಿಕ ಮನೊರಂಜನ ಸ್ಪರ್ಧೆಯು ಮುಡಿಪು ಆಡಿಟೊರಿಯಂನಲ್ಲಿ ನಡೆಯಿತು.

ರಾಮ ಗುರಿಕಾರ ಯಾನೆ  ಮೋಹನ ಶೆಟ್ಟಿಗಾರರು  ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷ  ರಾಮದಾಸ ಶೆಟ್ಟಿಗಾರ್,  ಕರಾವಳಿ ಸಂಸ್ಕೃತಿಯ ಮೂಲಸ್ತೋತ್ರವಾದ ಭೂತ ಕೋಲ, ನಾಗಾರಾಧನೆ ಇತ್ಯಾ ದಿಗಳನ್ನು  ಸಂರಕ್ಷಿಸಲು ಇಂತಹಾ ಕಾರ್ಯಕ್ರಮಗಳು ಪರ್ಯಾಪ್ತವಾಗುತ್ತದೆ ಎಂದರು.

ಮಂಜೇಶ್ವರ  ಶ್ರೀ ವೀರಭದ್ರ  ಮಹಮ್ಮಾಯಿ ದೇವಸ್ಥಾನದ ಮೋಕ್ತೇಸರ ರಾಮ ಗುರಿಕಾರ ಯಾನೆ  ಮೋಹನ ಶೆಟ್ಟಿಗಾರರು ದೀಪ ಪ್ರಜ್ವಲಿಸಿ  ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಮಾತನಾಡಿ , ಕಲಾಸಂಭ್ರಮವು ಕುಲಸಂಭ್ರಮವೂ ಆಗಿದ್ದು  ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸದುದ್ದೇಶ ಹೊಂದಿದ ಆದರ್ಶ ಕಾರ್ಯವೆಂದರು.

ಅಭ್ಯಾಗತರಾಗಿದ್ದ  ರಾಜೇಂದ್ರ  ಶೆಟ್ಟಿಗಾರ್ ಬಸ್ರೂರು ಮಾತನಾಡಿ, ಎಳೆಯರಲ್ಲಿ  ಸತ್ಸಂಸ್ಕಾರವನ್ನು ರೂಢಿಸಬೇಕೆಂದೂ ಸಂಗೀತ, ಸಾಹಿತ್ಯ ಮತ್ತು ನಾಟ್ಯ  ಇತ್ಯಾದಿಗಳಲ್ಲಿ  ಅಭಿರುಚಿ ಬೆಳೆಸಲು ಈ ಕಾರ್ಯಕ್ರ ಮವು ಉತ್ತ ಮ ಮಾಧ್ಯಮವೆಂದು ಶ್ಲಾ ಘಿಸಿದರು. ಬಾಬು ಶೆಟ್ಟಿಗಾರ್ ಕೋಕಳರವರು ಅನಿಸಿಕೆಯನ್ನು  ವ್ಯಕ್ತಪಡಿಸಿ,  ಯುವಕರ ಪ್ರತಿಭೆಗೆ ಅವಕಾಶ ಕಲ್ಪಿಸುವ  ಮಹತ್ಕಾರ್ಯದ ಬಗ್ಗೆ ಪ್ರ ಶಂಸಿಸಿದರು. ವಾಸುದೇವ ಶೆಟ್ಟಿ ಗಾರ್  ಮಂಜೇಶ್ವರರವರು ಮಾತನಾಡಿ, ತುಳುನಾಡಿನ ಸಂಸ್ಕೃತಿಯ ಸಾರವನ್ನು  ಮುಂದಿನ ಜನಾಂಗಕ್ಕೆ  ಒಯ್ಯುವುದಕ್ಕೆ  ಹೇತುವಾದ ಕ್ರಮಗಳ ಬಗ್ಗೆ ಆಸ್ಥೆವಹಿಸಬೇಕೆಂದು ಕರೆನೀಡಿದರು.

ಸಂಜೆ ನಡೆದ ಸಮಾರೋಪ ಸಮಾರಂಭವು ಸಂಸ್ಥೆಯ ಅಧ್ಯಕ್ಷ ತುಕಾರಾಮ ಶೆಟ್ಟಿಗಾರರ ಅಧ್ಯಕ್ಷತೆಯಲ್ಲಿ ಜರುಗಿತು. ಎಲ್ಲ  ಕಾರ್ಯಕರ್ತರ ಪರಿಶ್ರಮ ಮತ್ತು ತ್ಯಾಗದಿಂದ ಅಭೂತಪೂರ್ವವಾಗಿ ಕಲಾಸಂಭ್ರಮವು ಮೂಡಿಬಂದ ಬಗೆಗೆ ಹರ್ಷವನ್ನು  ವ್ಯಕ್ತಪಡಿಸಿದರಲ್ಲದೆ ಹದಿನಾರು ದೇವಸ್ಥಾನಗಳ ಸಹಕಾರಕ್ಕೆ  ಕೃತಜ್ಷತೆ ಸಲ್ಲಿಸಿದರು. ಅಭ್ಯಾಗತರಾದ ದತ್ತರಾಜ ಶೆಟ್ಟಿಗಾರರು ಉತ್ತಮ ಪರಿಕಲ್ಪನೆಯ ಪ್ರಯೋಗವು ಯಶಸ್ವಿಯಾಗಿರುವುದೆಂದು ತಿಳಿಸಿ ಸಂಸ್ಥೆಯನ್ನು  ಅಭಿನಂದಿಸಿದರು. ಲಕ್ಷಣ ಕೊಡಿಯಾಲ್ ಬೈಲ್ ರವರು  ಮಾತನಾಡಿ, ಪ್ರಥಮ ಬಾರಿಗೆ ಜಯಭೇರಿ ಬಾರಿಸಿ ಕಲಾಸಂಭ್ರಮವು ಇತಿಹಾಸ ನಿರ್ಮಿಸಿರುವುದಾಗಿ ಪ್ರಶಂಸಿದರು. ಮಂಜೇಶ್ವರ  ಶ್ರೀ  ವೀರಭದ್ರ  ಮಹಮ್ಮಾಯಿ ದೇವಸ್ಥಾನದ ಮಹಿಳಾ ವೇದಿಕೆಯ  ಅಧ್ಯಕ್ಷರಾದ ಸುಮತಿ ಚಂದ್ರಹಾಸ ಬೊಳ್ನರವರು ಕಲಾಸಂಭ್ರಮದ ಉತ್ತಮಿಕೆಯನ್ನು  ಕೊಂಡಾಡಿದರು.

ಈ ಶುಭಾವಸರದಲ್ಲಿ   ಅಧ್ಯಾಪನ ಮತ್ತು  ಯಕ್ಷಗಾನ ಕ್ಷೇತ್ರದ ಸಾಧಕರಾದ ದೂಮಣ್ಣ  ಶೆಟ್ಟಿಗಾರರನ್ನು  ಸನ್ಮಾನಿಸಲಾಯಿತು. ಸನ್ಮಾನಿತರು ಮಾತನಾಡಿ, ಕಲೆಯು ಮನಸ್ಸಿಗೆ ಮುದವನ್ನು  ಮತ್ತು  ಆತ್ಮಕ್ಕೆ  ಆನಂದವನ್ನು  ನೀಡುವುದೆಂದು ತಿಳಿಸಿದರಲ್ಲದೆ ಕಲೆಯ ನೆಲೆಯನ್ನು  ಭದ್ರ ಗೊಳಿಸಲು ಪ್ರ ಯೊಗಶೀಲರಾದ ಸಂಸ್ಥೆಯ ಕಾರ್ಯಕರ್ತರನ್ನು ಅಭಿನಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!