BlogCulturalEducationEntertainmentHighlightsHuman storiesLifestyleLocal newsOthersSuccess storiesTop StoriesTrending

ಉಪ್ಪುಂದ: ಜೆ ಸಿ ಐ ನಿಕಟ ಪೂರ್ವ ಅಧ್ಯಕ್ಷ ಪ್ರದೀಪ್ ಶೆಟ್ಟಿಗೆ ಕಮಲ ಪತ್ರ ಪ್ರಶಸ್ತಿ ಪುರಸ್ಕಾರ

Aware others:

ಬೈಂದೂರು: ಜೆಸಿಐ ಉಪ್ಪಂದದ 2023ರ ಅಧ್ಯಕ್ಷ, ತನ್ನ 100ನೇ ಕಾರ್ಯಕ್ರಮಕ್ಕೆ ಪದ್ಮಶ್ರೀ ಪುರಸ್ಕೃತರಾದ ಹರೆಕಳ ಹಾಜಬ್ಬನವರನ್ನು ಹಾಗೂ ವೃಕ್ಷಮಾತೆ ತುಳಸಿ ಗೌಡ  ಅವರನ್ನು ಕರೆಯಿಸಿ ಗೌರವಿಸುವ ಮೂಲಕ ಕಳೆದ ವರ್ಷದ  ಜೇಸಿ ವಲಯದ  ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ಪ್ರಶಸ್ತಿ ಪುರಸ್ಕೃತ, ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಅವರಿಗೆ   ಜೆಸಿ ಸಂಸ್ಥೆಗೆ  ಹಾಗೂ ಇತರ ಸಂಘ ಸಂಸ್ಥೆಗಳಿಗೆ  ಸಲ್ಲಿಸಿದ ಅಪಾರ ಸೇವೆಯನ್ನು  ಗುರುತಿಸಿ, ಪ್ರತಿಷ್ಠಿತ ಕಮಲ ಪತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭ ಅವರ ಗುಣಗಾನ ಮಾಡುತ್ತಾ, ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಇವರ ಸಾಧನೆ ಖಂಡಿತವಾಗಿಯೂ ಜೇಸಿ ಬುಕ್ ಆಫ್ ರೆಕಾರ್ಡ್. ಸಂಘ ಸಂಸ್ಥೆಗಳ ಮೂಲಕ ಸಂಘಟನಾ ಕಾರಣಕ್ಕಾಗಿ ಬೆಳೆದು ಅನೇಕ ಸಂಸ್ಥೆಗಳಿಗೆ ತನ್ನದೇ ಆದ ವಿಶೇಷವಾದ ಕೊಡುಗೆಯನ್ನು ನೀಡುತ್ತಾ ಅದರ ಏಳಿಗೆಗೆ ಶ್ರಮಿಸಿದವರು. ಅವರಿಗೆ ಕಮಲ ಪತ್ರ ಪ್ರಶಸ್ತಿ ನೀಡುತ್ತಿರುವುದು ಪ್ರಸ್ತುತವಾಗಿದೆ ಎಂದರು.

ಜೇಸಿ ಅಧ್ಯಕ್ಷ ಮಂಜುನಾಥ್ ದೇವಾಡಿಗ ಸಭಾಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಗೋವಿಂದ ಬಾಬು ಪೂಜಾರಿ, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಸದಸ್ಯ ರಘುರಾಮ ದೇವಾಡಿಗ, ಬಿಇಓ ನಾಗೇಶ್ ನಾಯ್ಕ್, ಕುಂದಾಪುರ ಕನ್ನಡ ಪ್ರತಿಷ್ಠಾನದ ಮುಖ್ಯಸ್ಥ ಶರತ್ ಶೆಟ್ಟಿ, ಪ್ರಿಯದರ್ಶಿನಿ ಬೆಸ್ಕೂರು, ಲಕ್ಷ್ಮಿಕಾಂತ ಬೆಸ್ಕೂರು, ನಾಗರಾಜ್ ಆರ್ ಸುವರ್ಣ, ನರಸಿಂಹದೇವಾಡಿಗ, ರಾಮದೇವಾಡಿಗ, ಮಹೇಂದ್ರ ಪೂಜಾರಿ ಯೆಡೇರಿ, ರವೀಂದ್ರ H, ಗುರುರಾಜ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಜೆ ಸಿ ನರಸಿಂಹ ದೇವಾಡಿಗ ವಂದಿಸಿದರು.

ಪ್ರದೀಪ್ ಶೆಟ್ಟಿ, ಮಾರಿಕಾಂಬ ಯೂತ್ ಕ್ಲಬ್, SDM ಗೆಳೆಯರ ಬಳಗ , ಕನ್ನಡ ಸಾಹಿತ್ಯ ಪರಿಷತ್ತು, ಕಳವಾಡಿ ಮಾರಿಕಾಂಬ ದೇವಸ್ಥಾನ, ಬಂಟರ ಯುವ ಸಂಘಟನೆ, ಬಂಟ ಯಾನೆ ನಾಡವರ ಸಂಘ, ಕುಂದಾಪುರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ, ಬೈಂದೂರು ಕಂಬಳ, ಬೈಂದೂರು ದಸರಾ, ಬೈಂದೂರು ಉತ್ಸವ, ಕಳವಾಡಿ ಹವ್ಯಾಸಿ ಕಲಾತಂಡ, ಭಜನಾ ತಂಡ, ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿರುವ ಇವರು ಈ ವರ್ಷ ಜೆಸಿ ವಲಯ 15 ರ ಜೇಸಿ ಸಪ್ತಾಹದ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ 👇


Aware others:

Leave a Reply

Your email address will not be published. Required fields are marked *

error: Content is protected !!