ಕೋಟೇಶ್ವರ: ಲಿವರ್ ಟ್ರಾನ್ಸ್ಪಲೆಂಟ್ – ವೃದ್ದೆಯ ಜೀವ ಉಳಿಸಲು ಹೋಗಿ ಸಾವನ್ನಪ್ಪಿದ ಮಹಿಳೆ!?
ಕುಂದಾಪುರ : ವೃದ್ದೆಯೊಬ್ಬರಿಗೆ ಲಿವರ್ ಯಕೃತ್ ಕಸಿ ಮಾಡಲು ತನ್ನ ಲಿವರ್ ಕೊಟ್ಟ ಮಹಿಳೆಯೊಬ್ಬರು ಬಲಿಯಾದ ಘಟನೆ ಕುಂದಾಪುರ ತಾಲೂಕಿನ ಕೊಟೇಶ್ವರದಲ್ಲಿ ನಡೆದಿದೆ. ಕೋಟೇಶ್ವರದ ಅರ್ಚನಾ ಕಾಮತ್ (34) ಎಂಬವರೇ ಪ್ರಾಣ ಕಳೆದುಕೊಂಡ ಮಹಿಳೆ.

69 ವರ್ಷದ ಹಿರಿಯ ಸಂಬಂಧಿ ವೃದ್ಧಿಯೊಬ್ಬರಿಗೆ ಯಕೃತ್ತಿನ ಕಸಿ ಅವಶ್ಯವಿದ್ದ ಕಾರಣ ಅರ್ಚನಾ ಕಾಮತ್ ಅವರು ಯಕೃತ್ ದಾನ ಮಾಡಲು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅರ್ಚನಾ ಸೋಂಕಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿದ್ದ ಅರ್ಚನಾ ಕಾಮತ್ ಜನಪ್ರಿಯರಾಗಿದ್ದರು. ಅರ್ಚನಾ ಕಾಮತ್ ಅವರ ಅಕಾಲಿಕ ನಿಧನದ ಸುದ್ದಿ ಇಡೀ ಸಮಾಜವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಮೃತರು ಪತಿ ಸಿಎ ಚೇತನ ಕಾಮತ್, 4 ವರ್ಷದ ಮಗು, ತಂದೆ, ತಾಯಿಯನ್ನು ಅಗಲಿದ್ದಾರೆ.