ರೈಲು ಡಿಕ್ಕಿ ಹೊಡೆದು ಯುವಕ ಸಾವು

ಕುಂದಾಪುರ: ಪೇಟೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಯುವಕನೊಬ್ಬ ರೈಲಿನಡಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಡುವರಿ ಗ್ರಾಮದ ಸತೀಶ(26) ಸಾವನ್ನಪ್ಪಿದಾತ. ಸತೀಶ್ ಶನಿವಾರ ಸಂಜೆ ಪೇಟೆಗೆ ಹೋಗಲೆಂದು ಮನೆಯಿಂದ ತೆರಳಿದ್ದ. ಾದರೆ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ರೈಲ್ವೆ ಹಳಿ ಕ್ರಾಸ್ ಮಾಡುವಾಗ ಅಕಸ್ಮಿಕವಾಗಿ ಕಾರಾವಾರ ಮಂಗಳೂರು ಕಡೆಗೆ ಹೊಗುವ ಮಂಗಳ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದು ಗಂಬೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂಬುದಾಘಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.