BlogEconomyHighlightsHuman storiesLocal newsNatureOthersState newsTop StoriesTrending

ಕುಂದಾಪುರ: ಗುಳ್ಳಾಡಿಯ ನಿತಿನ್ ಶೆಟ್ಟಿ ಗೆ ಸೌತ್ ಇಂಡಿಯಾ ಬೆಸ್ಟ್ ವಾಯ್ಸ್ ಓವರ್ ಪ್ರಶಸ್ತಿ

Aware others:

ಕುಂದಾಪುರ: ಅಧ್ಭುತ ಕಂಠಸಿರಿ, ಇಂಪಾದ ಹಿನ್ನೆಲೆ ಧ್ವನಿ ಯೊಂದಿಗೆ ಮನೆ ಮಾತಾಗಿರುವ ಟಿವಿ9 ನ ಖ್ಯಾತ ಯುವ ನಿರೂಪಕ ಕುಂದಾಪುರ ತಾಲೂಕಿನ ಗುಳ್ಳಾಡಿಯ ನಿತಿನ್ ಶೆಟ್ಟಿಗೆ ಟಿಎನ್ಐಟಿ (TNIT) ಸೌತ್ ಇಂಡಿಯನ್ ಹಿನ್ನೆಲೆ ಧ್ವನಿಗಾಗಿ ಬೆಸ್ಟ್ ವಾಯ್ಸ್ ಓವರ್ ಮೀಡಿಯಾ ಅವಾರ್ಡ್ಸ್ 2024 ಲಭಿಸಿದೆ.

ಮೂಲತಃ ಕುಂದಾಪುರದ ಬೇಳೂರು ಗ್ರಾಮದ ಗುಳ್ಳಾಡಿಯವರಾಗಿರುವ ನಿತಿನ್ ಶೆಟ್ಟಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಳ್ಳಾಡಿ ಮತ್ತು ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಉಳ್ತೂರಿನಲ್ಲಿಯೂ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ವಿವೇಕ ಪದವಿ ಪೂರ್ವ ಕಾಲೇಜು ಕೋಟ ದಲ್ಲಿ ಮುಗಿಸಿ, ಬಿ.ಕಾಂ ಪದವಿಯನ್ನು ಬೆಂಗಳೂರಿನಲ್ಲಿ  ಮುಗಿಸಿದ್ದಾರೆ.

90.4 ಎಫ್.ಎಂನಲ್ಲಿ ಪ್ರಥಮ ರೇಡಿಯೋ ಜಾಕಿ (RJ)ಯಾಗಿ ನಂತರ ನಾನಾ ರೇಡಿಯೋ ಮತ್ತು ಲೋಕಲ್ ಟಿವಿ ಚಾನೆಲ್ ಗಳಲ್ಲಿ ವಿಡಿಯೋ ಜಾಕಿ(VJ)ಯಾಗಿಯೂ ಕೆಲಸ ನಿರ್ವಹಿಸಿದ್ದರು. ಕಸ್ತೂರಿ ನ್ಯೂಸ್, ರಾಜ್ ನ್ಯೂಸ್, ಪ್ರಜಾ ಟಿವಿ ಹಾಗೆ ಹತ್ತು ಹಲವು ಖಾಸಗಿ ಚಾನಲ್ ಗಳಲ್ಲಿ ಕೆಲಸ ನಿರ್ವಹಿಸಿದ್ದರು. ಈಗ ಪ್ರತಿಷ್ಠಿತ ಟಿವಿ9 ನ ಉದ್ಯೋಗಿಯಾಗಿರುವ ನಿತಿನ್ ಶೆಟ್ಟಿ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!