Blog

ಶಿರೂರು: ಬಿಡಾಡಿ ದನಗಳ ಕದ್ದೊಯ್ದ ಪ್ರಕರಣ: ವಾಹನ ಸಹಿತ ಇಬ್ಬರ ಬಂಧನ

Aware others:

ಕುಂದಾಪುರ: ಜೂನ್ 7ರ ರಾತ್ರಿ  ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಪೇಟೆಯ ಮಂಜುನಾಥ ಹೊಟೇಲ್ ಎದುರುಗಡೆ ಖಾಲಿ ಜಾಗದಲ್ಲಿ ಮಲಗಿದ್ದ ಗೋವುಗಳನ್ನು ಕದ್ದೊಯ್ದ ಪ್ಕರಣಕ್ಕರ ಸಂಬಂಧಿಸಿದಂತೆ ಬೈಂದೂರು ಪೊಲೀಸರು ಎರಡು ವಾಹನಗಳನ್ನು ವಶಪಡಿಸಿಕೊಂಡು ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೈಂದೂರು ಪೊಲೀಸ್ ಠಾಣಾ ಸರಹದ್ದಿನ  ಶಿರೂರು ಗ್ರಾಮದ ಶೀರೂರು ಪೇಟೆಯ ಮಂಜುನಾಥ ಹೊಟೇಲ್ ಎದುರುಗಡೆ   ಖಾಲಿ ಜಾಗದಲ್ಲಿ ಮಲಗಿದ್ದ ಗೋವುಗಳನ್ನು ಕದ್ದು ಒಯ್ದಿದ್ದಾರೆ ಎಂದು ಬೈಂದೂರು ನಮೋ ಬಳಗದ ಅಧ್ಯಕ್ಷ ಶ್ರೀಧರ್ ಬಿಜೂರು ಪೊಲೀಸರಿಗೆ ಸಿಸಿಟಿವಿ ವಿಡಿಯೋ ಸಹಿತ ದೂರು ನೀಡಿದ್ದರು

ಈ ಬಗ್ಗೆ ಕಾರ್ಯಾಚರಣೆಗಿಳಿದ ಪೊಲೀಸರು,  ಉಡುಪಿ ಎಸ್ಪಿ ಅರುಣ್ ಕೆ  ಮಾರ್ಗದರ್ಶನದಲ್ಲಿ, ಎಡಿಷನಲ್ ಎಸ್.ಟಿ.ಸಿದ್ದಲಿಂಗಪ್ಪ  ಮತ್ತು ಪರಮೇಶ್ವರ ಹೆಗಡೆ ಹಾಗೂ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು, ಬೈಂದೂರು ಸರ್ಕಲ್ ಇನ್ ಸ್ಪೆಕ್ಟರ್ ಸವೀತ್ರ ತೇಜ್ ನೇತೃತ್ವದಲ್ಲಿ ಎಸೈ ಮ್ಮೇಶ್ ಬಿಎನ್  ತಂಡವನ್ನು ರಚಿಸಿ,  ಜಿಲ್ಲಾ ಸಿ.ಡಿ.ಆರ್ ವಿಭಾಗದ  ತಾಂತ್ರಿಕ ಸಿಬ್ಬಂದಿ ಯವರ ಸಹಾಯವನ್ನು ಪಡೆದು ಆರೋಪಿಗಳಾದ ಎಂ.ಕೋಡಿ ನಿವಾಸಿ ಸಮದ್‌ಮಂಜಿಲ್‌ನ ಅಬ್ದುಲ್ ಸಮಾದ್ (27) ಹಾಗೂ ಕೋಡಿಯ  ಬಿ ಫಾತಿಮಾ ಕಟೇಜ್ ನಿವಾಸಿ ಅಬ್ದುಲ್ ರೆಹಮಾನ್ (25) ರನ್ನು ಹಾಲಾಡಿ ರಸ್ತೆಯ ಕೊಟೇಶ್ವರ ಸನ್ ರೈಸ್ ಫ್ಯಾಕ್ಟರಿ ಬಳಿ ಬಂಧಿಸಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದಾರೆ ಎನ್ನಲಾದ ಮಹೇಂದ್ರ  XUV 500  ಕಾರು ಮತ್ತು Eco Sport Ford ಕಾರು, ಎರಡು ಮೊಬೈಲ್ ಸೇರಿದಂತೆ ಒಟ್ಟು ಅಂದಾಜು ಒಂಭತ್ತು ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಎಂ.ಕೋಡಿ ನಿವಾಸಿ ಸಮದ್‌ಮಂಜಿಲ್‌ನ ಅಬ್ದುಲ್ ಸಮಾದ್ (27) ಹಾಗೂ ಕೋಡಿಯ  ಬಿ ಫಾತಿಮಾ ಕಟೇಜ್ ನಿವಾಸಿ ಅಬ್ದುಲ್ ರೆಹಮಾನ್ (25) ರನ್ನು ಹಾಲಾಡಿ ರಸ್ತೆಯ ಕೊಟೇಶ್ವರ ಸನ್ ರೈಸ್ ಫ್ಯಾಕ್ಟರಿ ಬಳಿ ಬಂಧಿಸಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದಾರೆ ಎನ್ನಲಾದ ಮಹೇಂದ್ರ  XUV 500  ಕಾರು ಮತ್ತು Eco Sport Ford ಕಾರು, ಎರಡು ಮೊಬೈಲ್ ಸೇರಿದಂತೆ ಒಟ್ಟು ಅಂದಾಜು ಒಂಭತ್ತು ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!