ಗೀತಾ ಯಡಿಯೂರಪ್ಪನ ಡಮ್ಮಿ ಕ್ಯಾಂಡಿಡೇಟ್ : ಈಶ್ವರಪ್ಪ ಹೇಳಿಕೆ
ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿರುವ ಗೀತಾ ಶಿವರಾಜ್ ಕುಮಾರ್ ಅವರು ಯಡಿಯೂರಪ್ಪನವರ ಡಮ್ಮಿ ಕ್ಯಾಂಡಿಡೇಟ್ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಅವರು ಬೈಂದೂರಿನ ಉಪ್ಪುಂದದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಯಡಿಯೂರಪ್ಪ ತನ್ನ ಮಗನ ಗೆಲುವಿಗಾಗಿ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಜೊತೆಗೆ ಟೈ ಅಪ್ ಮಾಡಿಕೊಂಡಿದ್ದಾರೆ ಎಂದಿರುವ ಈಶ್ವರಪ್ಪ, ಅದಕ್ಕಾಗಿಯೇ ಗೀತಾ ಶಿವರಾಜ್ ಕುಮಾರ್ ಅವರನ್ನು ಕಾಂಗ್ರೆಸ್ ನಿಂದ ಸ್ಪರ್ಧಿಸುವಂತೆ ಮಾಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ನ ಅಸಮಾಧಾನಿತ ನಾಯಕರು ಮತ್ತು ಮತದಾರರು ನನ್ನನ್ನು ಬೆಂಬಲಿಸ್ತಿದಾರೆ ಎಂದರು. ನನಗೆ ಆರ್ ಎಸ್ ಎಸ್, ಸಂಘಪರಿವಾರ ಶಿವಮೊಗ್ಗ ದಲ್ಲಿ ಬೆಂಬಲಿಸಿದೆ. ಸಂಘ್ ಕುಚ್ ನಹಿ ಕರೇಗ.. ಸಬ್ ಕುಚ್ ಕರೇಗ ಎಂದು ಗುರೂಜಿ ಹೇಳಿದ್ದಾರೆ ಎಂದು ಅವರು ಹೇಳಿದ್ದಾರೆ.
ಚುನಾವಣೆಯಲ್ಲಿ ಸಾಧು ಸಂತರನ್ನು ಎಳೆದು ತರಬಾರದಿತ್ತು. ಇದು ಬಹಳ ನೋವಿನ ಸಂಗತಿ ಎಂದಿರುವ ಈಶ್ವರಪ್ಪ, ಇದನ್ನು ರಾಷ್ಟ್ರ ಭಕ್ತಬಳಗ ಖಂಡಿಸುತ್ತದೆ ಎಂದರು. ಲೋಕಸಭಾ ಕ್ಷೇತ್ರದಲ್ಲಿ ನನಗೆ ಪೂರ್ಣ ಜನಬೆಂಬಲ ಸಿಕ್ಕಿದೆ. ಅಲ್ಲದೇ ಕಾಂಗ್ರೆಸ್ ಹಾಗೂ ಬಿಜೆಪಿಯವರು ಹಿಂಬಾಗಿಲಿನಿಂದ ಬೆಂಬಲ ಕೊಡುವುದಾಗಿ ಹೇಳಿದ್ದಾರೆ ಎಂದರು. ಈಶ್ವರಪ್ಪ ಯಾರು ಅಂತ ಗೊತ್ತಿಲ್ಲ ಎಂದಿರುವ ರಾಧಾಮೋಹನ್ ಅಗರ್ವಾಲ್ ಮನೆಗೆ ಬಂದಿದ್ರು. ಅದು ಅವರಿಗೆ ಮರೆತಿರಬೇಕು ಎಂದು ಕುಟುಕಿದರು.
ನನ್ನ ಕೂಗು ಕೇಂದ್ರ ತಲುಪಿದೆ ಇವತ್ತು ಕೂಡ ಫೋನ್ ಬಂದಿದೆ. ಅಮಿತ್ ಶಾ ಗೆ ಮಾತು ತಲುಪಿದೆ. ವಿಚಾರ ತಿಳಿದು ಷಾಗೆ ಉತ್ತರ ಕೊಡೋದಕ್ಕೆ ಆಗಿಲ್ಲ ಎಂದಿರುವ ಅವರು, ವಿಜಯೇಂದ್ರ ಎಳಸು ಅವನಿಗೆ ಅನುಭವ ಇಲ್ಲ. ನನ್ನ ಸಾಧನೆ ಬಗ್ಗೆ ನಿನ್ನ ಅಪ್ಪನಿಗೆ ಕೇಳು. ರಾಜ್ಯದಲ್ಲಿ ನಾನು ಕೆಲಸ ಮಾಡಿಲ್ಲ ಅನ್ನಲಿ, ಆಗ ನಿಮಗೆ ಉತ್ತರ ಕೊಡ್ತೇನೆ ಎಂದು ಯಡಿಯೂಪ್ಪ ಮಕ್ಕಳಿಗೆ ಕಿವಿಮಾತು ಹೇಳಿದರು. ಹಿರಿಯರ ತಪಸ್ಸಿಂದ ಕಟ್ಟಿದ ಪಕ್ಷ ಇಂದು ಕರ್ನಾಟಕದಲ್ಲಿ ಅಧೋಗತಿಗೆ ಹೋಗುತ್ತಿರುವುದು ಬೇಸರ ತರಿಸಿದೆ. ಬಿಜೆಪಿ ಪ್ರೈವೆಟ್ ಲಿಮಿಟೆಡ್ ಪಾರ್ಟ್ ನರ್ ಶಿಪ್ ಕಂಪನಿ ಅಲ್ಲ ಎನ್ನುವುದನ್ನು ಅಪ್ಪಮಕ್ಕಳು ಅರ್ಥ ಮಾಡಿಕೊಳ್ಳಬೇಕು ಎಂದರು.
ಮೈತ್ರಿ ಒಪ್ಪಂದ ಒಳಮರ್ಮ ಹೆಚ್ ಡಿಕೆಗೆ ಬೇಗ ಅರ್ಥಾಗಲಿ. ಶಿವಮೊಗ್ಗ ಸಭೆಯೊಂದರಲ್ಲಿ ಕುಂಕುಮ ಒರೆಸಿದ ಗೀತಾ ಹಾಗೂ ಶಿವರಾಜಕುಮಾರ್ ಡೋಂಗಿ ಜಾತ್ಯಾತೀತ ವ್ಯವಸ್ಥೆಯನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ ಅವರು, ಇವರೆಲ್ಲ ಮುಸಲ್ಮಾನರನ್ನು ಸಂತೃಪ್ತಿ ಮಾಡಿಕೊಂಡಿರಲಿ. ನಾನು, ನನ್ನ ಜೊತೆ ಬಂದವರು ತಾಯಿ ಭಾರತಿಯನ್ನು ನಂಬಿದ್ದೇವೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಒಬ್ಬ ಅಯೋಗ್ಯ. ಮರಿರಾಜಹುಲಿ ನಾಯಿಕುನ್ನಿಗಿಂತ ಕೆಳಗಿನ ಯೋಗ್ಯತೆ ತೋರಿಸಿದ್ದಾನೆ. ಡಿವಿಎಸ್, ಪ್ರತಾಪ್ ಸಿಂಹ, ಸಿಟಿ ರವಿ, ಅನಂತ್ ಕುಮಾರ್ ಹೆಗಡೆ ಸೈನ್ಯಕ್ಕೆ ದ್ರೋಹವಾಗಿದೆ. ಯಡಿಯೂರಪ್ಪ ಟಿಕೆಟ್ ಕೊಡಿಸೋದಾಗಿ ಗೆಲ್ಲಿಸೋದಾಗಿ ಭರವಸೆ ಕೊಟ್ಟು ಮೋಸ ಮಾಡಿದ್ದಾರೆ. ಬಿವೈವಿ ಯೋಗ್ಯತೆ ಒಂದು ತಿಂಗಳಲ್ಲಿ ಗೊತ್ತಾಗಿದೆ
ಯಡಿಯೂರಪ್ಪ ರಾಜ್ಯದಲ್ಲಿ ಮೈತ್ರಿ ಮುಂದುವರೆಯತ್ತದೆ ಎಂದಿದ್ದಾರೆ. ಆದರೆ ಕಾಂಗ್ರೆಸ್ ಜೊತೆ ಇರೋ ಮೈತ್ರಿ ಮುಂದುವರೆಯುತ್ತೋ? ಅಥವಾ ಒಳ ಒಪ್ಪಂದದ ಮೈತ್ರಿಯೋ ಗೊತ್ತಿಲ್ಲ. ನನ್ನ ಚುನಾವಣಾ ಚಿಹ್ನೆ ಎರಡು ಮೂರು ದಿನದಲ್ಲಿ ಫೈನಲ್ ಆಗುತ್ತದೆ. ಚಿಹ್ನೆ ವಿಚಾರದಲ್ಲಿ ನನಗೆ ತಕರಾರು ಇದೆ. ಚುನಾವಣೆಯಲ್ಲಿ ಸಿಂಹ ಹುಲಿ ತರದ ಚಿಹ್ನೆ ಬೇಕು. ಈಗ ಕೊಟ್ಟಿರೋ ಪಟ್ಟಿಯಲ್ಲಿ ಯಾವುದು ಒಳ್ಳೆ ಚಿಹ್ನೆಗಳಿಲ್ಲ. ಈ ಬಗ್ಗೆ ಚುನಾವಣೆ ಆಯೋಗಕ್ಕೆ ಪತ್ರ ಬರೀತೇನೆ ಎಂದು ಈಶ್ವರಪ್ಪ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾಜೀ ಶಾಸಕ ಗೂಳಿ ಹಟ್ಟಿ ಶೇಖರ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.