ಕುಂದಾಪುರ: ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್ ಪಡೆದುಕೊಳ್ಳಲು ಮನವಿ
ಕುಂದಾಪುರ ತಾಲೂಕು ಮತ್ತು ಬೈಂದೂರು ತಾಲೂಕು ಭಾಗದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್ಗಳನ್ನು ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಕಾರ್ಮಿಕ ಸೇವಾ ಕೆಂದ್ರದಿಂದ ವಿತರಣೆ ಮಾಡಲಾಗುತ್ತಿದ್ದು, ಈ ಕೆಳಕಂಡಂತೆ ತಿಳಿಸಿರುವ ಷರತ್ತುಗಳನ್ನು ಪೂರೈಸಿರುವ ನೋಂದಾಯಿತ ಕಟ್ಟಡ ಕಾರ್ಮಿಕರು ಈ ಕೆಳಕಂಡಂತೆ ತಿಳಿಸಿರುವ ಅಗತ್ಯ ದಾಖಲಾತಿಗಳನ್ನು ಈ ಕೆಳಕಂಡಂತೆ ತಿಳಿಸಿರುವ ಸ್ಥಳಕ್ಕೆ ಆಗಮಿಸಿ ಸುರಕ್ಷತಾ ಕಿಟ್ಗಳನ್ನು ಪಡೆದುಕೊಳ್ಳುವಂತೆ ತಿಳಿಯಪಡಿಸಿದೆ.

ಲಭ್ಯವಿರುವ ಸುರಕ್ಷತಾ ಕಿಟ್ : ಮೇಷನ್, ವೆಲ್ಡರ್, ಕಾರ್ಪೇಂಟರ್, ಪೈಂಟರ್, ಎಲೆಕ್ಟ್ರೀಷಿಯನ್ (ಕಟ್ಟಡ ಕಾರ್ಮಿಕರ ಗುರುತಿನ ಚೀಟಿಯಲ್ಲಿ ಸದರಿ ವೃತ್ತಿಯು ನಮೂದಾಗಿರಬೇಕು)
ಷರತ್ತುಗಳು:
1) ಈ ಹಿಂದೆ ಸುರಕ್ಷತಾ ಕಿಟ್ ಪಡೆದವರು ಸದರಿ ಕಿಟ್ ಅನ್ನು ಪಡೆಯಲು ಅರ್ಹರಿರುವುದಿಲ್ಲ
2) ಸದರಿ ಸುರಕ್ಷತಾ ಕಿಟ್ ಅನ್ನು ಪಡೆಯಲು ಮೊದಲು ಬಂದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು.
ನೀಡಬೇಕಾದ ಅಗತ್ಯ ದಾಖಲಾತಿ:
1) ಈ ಕಾರ್ಡ್ ಜೆರಾಕ್ಸ್ ಪ್ರತಿ (ನೋಂದಾಯಿತ ಕಟ್ಟಡ ಕಾರ್ಮಿಕರು ಮಂಡಳಿಯ ತಂತ್ರಾಂಶದಿಂದ ಕಡ್ಡಾಯವಾಗಿ ಈ – ಕಾರ್ಡ್ ಪಡೆದುಕೊಂಡಿರಬೇಕು ಮತ್ತು ಸದಸ್ಯತ್ವ ಚಾಲ್ತಿಯಲ್ಲಿರಬೇಕು)
2) ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ
ಸ್ಥಳ: ಚತುರ್ಥಿ ಹೋಟೆಲ್ ಪಕ್ಕ, ಬ್ಯಾಂಕ್ ಆಪ್ ಬರೋಡಾ ಎದುರುಗಡೆ, ತಲ್ಲೂರು
ದಿನಾಂಕ:30-08-2026 ಭಾನುವಾರ, ಸಮಯ : ಬೆಳಿಗ್ಗೆ 09:00 ಗಂಟೆಯಿಂದ ಸಂಜೆ 5:00 ರವರೆಗೆ
ಸಂರ್ಪಕಿಸಬೇಕಾದ ದೂರವಾಣಿ ಸಂಖ್ಯೆ: ಕಾರ್ಮಿಕ ಸೇವಾ ಪ್ರತಿನಿಧಿ – 1) 9035954606 2) 9035954605
