ಕುಂದಾಪುರ: ಶ್ರೀ ನಾರಾಯಣಗುರು ಯುವಕ ಮಂಡಲದ ಅಧ್ಯಕ್ಷರಾಗಿ ಸಂತೋಷ ಪೂಜಾರಿ ಬೀಜಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಪೂಜಾರಿ ನೇರಳಕಟ್ಟೆ ಆಯ್ಕೆ
ಕುಂದಾಪುರ: ಇಲ್ಲಿನ ಪ್ರತಿಷ್ಠಿತ ಯುವಕ ಮಂಡಲಗಳಲ್ಲಿ ಒಂದಾದ ಶ್ರೀ ನಾರಾಯಣಗುರು ಯುವಕ ಮಂಡಲ (ರಿ.) ಇದರ 2026-27ರ ಸಾಲಿನ ಅಧ್ಯಕ್ಷರಾಗಿ ಸಂತೋಷ ಪೂಜಾರಿ ಬೀಜಾಡಿ ಆಯ್ಕೆಯಾಗಿದ್ದು ಗೌರವಾಧ್ಯಕ್ಷರಾಗಿ ಅಶೋಕ್ ಪೂಜಾರಿ ಬೀಜಾಡಿ, ಉಪಾಧ್ಯಕ್ಷರುಗಳಾಗಿ ಗಣೇಶ ಪೂಜಾರಿ ಕೆಂಚನೂರು, ರಮೇಶ್ ಪೂಜಾರಿ ಮದ್ದುಗುಡ್ಡೆ ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಪೂಜಾರಿ ನೇರಳಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ಅಶೋಕ್ ಪೂಜಾರಿ ಕೆರೆಕಟ್ಟೆ, ಕೋಶಾಧಿಕಾರಿಯಾಗಿ ನಿತ್ಯಾನಂದ ಪೂಜಾರಿ ಆನಗಳ್ಳಿ, ಜೊತೆ ಕೋಶಾಧಿಕಾರಿಯಾಗಿ ಚಂದ್ರ.ವಿ ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ಅಭೀಷೇಕ್ ಪೂಜಾರಿ ಬೀಜಾಡಿ, ಜೊತೆ ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ ಪೂಜಾರಿ ಸಿ.ಕೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಭರತ್ ಪೂಜಾರಿ ಚರ್ಚ್ ರಸ್ತೆ, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಚಿನ್ ಪೂಜಾರಿ ಮದ್ದುಗುಡ್ಡೆ ಇವರುಗಳು ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
