ಧ್ವನಿ-ಬೆಳಕಿನ ಹಿರಿಯ ತಂತ್ರಜ್ಞ, ಸಾಮಾಜಿಕ ಕಾರ್ಯಕರ್ತ ಕೃಷ್ಣಾನಂದ ಶ್ಯಾನುಭಾಗ್ ಅವರಿಗೆ ಸನ್ಮಾನ

ಕುಂದಾಪುರ: ಉಡುಪಿ ಜಿಲ್ಲಾ ಧ್ವನಿ ಬೆಳಕು ಸಂಯೋಜಕರ ಸಂಘಟನೆ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ 15ನೇ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಆರು ವಲಯಗಳ ಹಿರಿಯ ಬೆಳಕಿನ ತಂತ್ರಜ್ಞರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಕುಂದಾಪುರ ತಾಲೂಕಿನ ಹಿರಿಯ ಧ್ವನಿ ಬೆಳಕು ತಂತ್ರಜ್ಞ ಕೃಷ್ಣಾನಂದ ಶ್ಯಾನುಭಾಗ್ ಅವರನ್ನೂ ಸನ್ಮಾನಿಸಲಾಯಿತು.
