ಸಂಸದ ಕೋಟಾ ಹಾಗೂ ಉದ್ಯಮಿ ಆನಂದ ಸಿ ಕುಂದರ್ ಅವರಿಗೆ ಸನ್ಮಾನ
ಕುಂದಾಫುರ: ಶ್ರೀ ಕ್ಷೇತ್ರ ಚಾಮುಂಡೇಶ್ವರಿ ಸಹಪರಿವಾರ ವಿಠಲವಾಡಿ ಬ್ರಹ್ಮ ಕಲಶೋತ್ಸವ ಪ್ರಯುಕ್ತ ಆಗಮಿಸಿದ ಉಡುಪಿ ಚಿಕ್ಕಮಗಳೂರು ಜಿಲ್ಲೆಯ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಜನತ ಫಿಶ್ ಮಿಲ್ ಪ್ರವರ್ತಕರಾದ ಆನಂದ ಸಿ ಕುಂದರ್ ಇವರನ್ನು ಶ್ರೀ ಚಾಮುಂಡೇಶ್ವರಿ ಸಹಪರಿವಾರದ ಕಮಿಟಿ ಗೌರವ ಅಧ್ಯಕ್ಷ ದಿನೇಶ ಅಮೀನ್, ಅಧ್ಯಕ್ಷೆ ಗುಣರತ್ನ ಮತ್ತು ಕಮಿಟಿಯವರು ಸನ್ಮಾನಿಸಿದರು.

ಆ ಸಂದರ್ಭದಲ್ಲಿ ಕಮಿಟಿ ಉಪಾಧ್ಯಕ್ಷ ಗಿರೀಶ ಜಿ ಕೆ,ಮಂಜುನಾಥ ವಿ, ಕಾರ್ಯದರ್ಶಿ ದಿವಾಕರ ಮೆಂಡನ್, ಜೊತೆ ಕಾರ್ಯದರ್ಶಿ ದಿನೇಶ್ ಪುತ್ರನ್ ವಿಠಲವಾಡಿ, ಕೋಶಾಧಿಕಾರಿ ಗಣೇಶ ಪೂಜಾರಿ, ಜೊತೆ ಕೋಶಾಧಿಕಾರಿ ಪ್ರವೀಣ್ ಉಳ್ಳಾಲ , ಗಣೇಶ ಕೆ ಅಮೀನ್ ಅರ್ಚಕರಾದ ಮಹೇಶ ವಿಠಲವಾಡಿ, ನಿತ್ತಿನ್ ವಿಠಲವಾಡಿ, ಸಮಿತಿ ಸದಸ್ಯರಾದ ಕಮಲಾಕ್ಷ, ಸತೀಶ ಶೆಟ್ಟಿ, ನಾರಾಯಣ ವಿ, ಭಾಸ್ಕರ ವಿಠಲವಾಡಿ, ಭಾಸ್ಕರ ಎಮ್ ವಿಠಲವಾಡಿ, ಚಂದ್ರ ಮೆಸ್ತ್ರಿ ಬರೆಕಟ್ಟು, ಶಂಕರ ಪೂಜಾರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
