ಬೈಂದೂರು: ಚಪ್ಪರಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ನಾಗೇಶ್ ಗಾಣಿಗ ಹಿತ್ಲಮನೆ ಆಯ್ಕೆ

ಕುಂದಾಪುರ: ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಪ್ಪರಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2026ನೇ ಸಾಲಿನ ಹಳೆ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳನ್ನು ಜುಲೈ 20ರಂದು ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ನಾಗೇಶ್ ಗಾಣಿಗ, ಹಿತ್ಲಮನೆ, ಬೀಜಮಕ್ಕಿ ಆಯ್ಕೆಯಾದರು. ನೂತನ ಪದಾಧಿಕಾರಿಗಳ ವಿವರ: ಗೌರವಾಧ್ಯಕ್ಷರು – ಶಶಿಧರ ಶೆಟ್ಟಿ (ಅಧ್ಯಾಪಕರು), ಶೇಖರ್ ಗಾಣಿಗ (ಅಧ್ಯಾಪಕರು), ಗೌರವ ಸಲಹೆಗಾರರು – ಗಿರೀಶ್ ಪೂಜಾರಿ (ಮಣ್ಮನೆ), ಅಧ್ಯಕ್ಷರು – ನಾಗೇಶ್ ಗಾಣಿಗ (ಹಿತ್ಲಮನೆ, ಬೀಜಮಕ್ಕಿ), ಉಪಾಧ್ಯಕ್ಷರು – ಅಶೋಕ ಗಾಣಿಗ (ಹಿತ್ಲಮನೆ, ಬೀಜಮಕ್ಕಿ), ಗುಲಾಬಿ ಪೂಜಾರಿ (ಕೊಣ್ಕಿಮನೆ), ಕಾರ್ಯದರ್ಶಿ – ಪ್ರದೀಪ್ ಎನ್. ಶೆಟ್, ಜೊತೆ ಕಾರ್ಯದರ್ಶಿ – ರಾಘವೇಂದ್ರ ಪೂಜಾರಿ (ಕೇರಿಬಳಿ), ಕೋಶಾಧಿಕಾರಿಗಳು – ಸಂಗೀತ ಜೈನ್ (ಚಪ್ಪರಿಕೆ), ಸುಮನ ಗಾಣಿಗ (ಹಿತ್ಲಮನೆ, ಬೀಜಮಕ್ಕಿ), ಕಾರ್ಯಕಾರಿ ಸಮಿತಿ – ರಾಘವೇಂದ್ರ ಎಂ. ಗಾಣಿಗ (ಬೀಜಮಕ್ಕಿ), ರಾಘವೇಂದ್ರ ಪೂಜಾರಿ (ಮಣ್ಮನೆ), ವೀರೇಂದ್ರ ನಾಯ್ಕ (ಮುತ್ತಾಬೇರು), ಕಿರಣ್ ನಾಯ್ಕ್ (ಮುಲ್ಲಿ), ನಾಗೇಶ್ ಪೂಜಾರಿ (ಬಳಗಾರಡಿ), ಚಂದ್ರ ಪೂಜಾರಿ (ನಾರ್ನಡಿ), ರಾಘವೇಂದ್ರ ಗಾಣಿಗ (ಹಿತ್ಲಮನೆ, ಬೀಜಮಕ್ಕಿ), ಸೋಶಿಯಲ್ ಮೀಡಿಯಾ ತಂಡ – ರಮೇಶ್ ನಾಯ್ಕ್ ಅತ್ತಿಹೊಳೆ, ಶರತ್ ಗೌಡ ಹುಂತನಗೋಳಿ, ಜಯರಾಮ ಗೌಡ ಕುರುಡಬೇರು, ಪ್ರಸನ್ನ ಕುಮಾರ್ ಜೈನ್ ಹಿತ್ಲಮನೆ ಆಯ್ಕೆಯಾಗಿದ್ದಾರೆ.
